ಡಾಕ್ಟರ್, ಪೋಲೀಸರ ಮೇಲೆ ಕಲ್ಲು ತೂರಿದವರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ ಉತ್ತರ ಪ್ರದೇಶದ ಹಿಂದೂಗಳು, ವೀಡಿಯೋ ನೋಡಿ

ಕೊರೋನಾ ಸೋಂಕು ವಿಶ್ವದಾದ್ಯಂತ ಮರಣಮೃದಂಗ ಮುಂದುವರೆಸಿದೆ. ದೇಶದಲ್ಲಿಯೂ ಕೊರೋನಾ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಳವಾಗುತ್ತಿದೆ. ಕೊರೋನಾ ನಿಯಂತ್ರಕ್ಕೆ ಬಂತು ಅಂದುಕೊಳ್ಳುತ್ತಿರುವಾಗಲೇ ತಬ್ಲಿಘ್ ಜಮಾತ್ ನಡೆಸಿದ ಆ ಒಂದು ಕಾರ್ಯಕ್ರಮ ದೇಶದಾದ್ಯಂತ ಕೊರೋನಾ ಪ್ರಕರಣಗಳನ್ನು ಒಂದೇ ವಾರದಲ್ಲಿ ದ್ವಿಗುಣಗೊಳಿಸಿತು.

ಸರ್ಕಾರದ ಅಂಕಿ ಅಂಶಗಳ ಪ್ರಕಾರ ದೇಶದ ಕೊರೋನಾ ಪ್ರಕರಣದಲ್ಲಿ 30-35% ಸೋಂಕಿಗೆ ತಬ್ಲಿಘ್ ಜಮಾತ್ ಕಾರಣವಾಗಿದೆ. ಇನ್ನೊಂದು ಬೆಚ್ಚಿಬೀಳಿಸೋ ವಿಷಯವೇನೆಂದರೆ ಈ ತಬ್ಲಿಘಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನೇಕರು ಇನ್ನೂ ತಲೆಮರೆಸಿಕೊಂಡಿದ್ದಾರೆ. ಕರ್ನಾಟಕದಲ್ಲೇ 40ಕ್ಕೂ ಹೆಚ್ಚು ಜನರ ಸುಳಿವೇ ಸಿಕ್ಕಿಲ್ಲ.

ಇನ್ನು ಈ ಜಮಾತಿಗರ ಸುಳಿವು ಸಿಕ್ಕು ಪೋಲೀಸರು, ವೈದ್ಯರು ಕರೆತರಲು ಹೋದರೆ ಅವರ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸುತ್ತಿದ್ದಾರೆ. ದೇಶದಾದ್ಯಂತ ಇಂತಹ ಹಲವು ಪ್ರಕರಣಗಳು ದಿನೇದಿನೇ ನಡೆಯುತ್ತಿದೆ. ಉತ್ತರಪ್ರದೇಶದಲ್ಲಿಯೂ ಇಂತಹ ಕೆಲ ಪ್ರಕರಣ ನಡೆದಿದ್ದು, ಯೋಗಿ ಸರ್ಕಾರ ಅಂತಹ ದುಷ್ಟರನ್ನು NSA ಬಂಧಿಸಿ ಜೈಲಿಗಟ್ಟಿದ್ದಾರೆ. ಇದಲ್ಲದೆ ಆಹಾರ ಪದಾರ್ಥಗಳ ಮೇಲೆ ಎಂಜಲು ಅಂಟಿಸಿ ಮಾರೋ ಕುಕೃತ್ಯಗಳೂ ನಡೆಯುತ್ತಿದ್ದು, ಅನೇಕರ ಬಂಧನವಾಗಿದೆ.

ಈ ಎಲ್ಲ ಘಟನೆಗಳಿಂದ ರೋಸಿಹೋಗಿರೋ ಉತ್ತರ ಪ್ರದೇಶದ ಜನ ಇದೀಗ ಆ ಒಂದು ಸಮುದಾಯಕ್ಕೆ ಸಂಪೂರ್ಣವಾಗಿ ಬಹಿಷ್ಕಾರವನ್ನೇ ಹಾಕಿದ್ದಾರೆ. ಅವರ ಅಂಗಡಿಗಳಲ್ಲಿ ಯಾವುದೇ ಸಾಮಾಗ್ರಿ ಖರೀದಿ ನಡೆಸಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಹಲವು ಗ್ರಾಮಗಳಲ್ಲಿ ಆಧಾರ್ ಕಾರ್ಡ್ ತೋರಿಸಿ ಹಿಂದೂ ಎಂದು ಖಚಿತಪಡಿಸಿಕೊಂಡು ವ್ಯಾಪಾರಕ್ಕೆ ಅವಕಾಶಕೊಡುತ್ತಿದ್ದಾರೆ.

ಅಂಗಡಿಗಳಲ್ಲಿ ಭಗವಾಧ್ವಜ ಹಾಕಿ, ಹಣೆಗೆ ಕುಂಕುಮ ಹಚ್ಚಿದ್ದರೆ ಮಾತ್ರ ವ್ಯಾಪಾರ, ಇಲ್ಲದಿದ್ದರೆ ಹಿಂದೂಗಳ ಕಾಲೊನಿಗೆ ಪ್ರವೇಶ ನಿಶಿದ್ದ. ತಬ್ಲಿಗಿಗಳು ಹಾಗೂ ಕೆಲ ಮತಾಂಧ ಶಕ್ತಿಗಳು ನಡೆಸಿದ ದುಷ್ಕೃತ್ಯಗಳಿಗೆ ಇದೀಗ ಆ ಒಂದು ಇಡೀ ಸಮುದಾಯವೇ ಬೆಲೆ ತೆರಬೇಕಾಗಿ ಬಂದಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ,

Watch Video

Previous Post Next Post