ಪುಂಡರ ಕೃತ್ಯಕ್ಕೆ ಬೆಚ್ಚಿಬಿದ್ದ ಜನ, ಅಷ್ಟಕ್ಕೂ ಪುಂಡರು ಮಾಡಿದ್ದೇನು? ಈ ವೀಡಿಯೋ ನೋಡಿ

ದೇಶದಲ್ಲಿ ಕರೋನಾ ತಾಂಡವವಾಡುತ್ತಿದ್ದರೂ ಪುಂಡರ ಪುಂಡಾಟಿಕೆ ನಿಂತಿಲ್ಲ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಪುಂಡರ ಕೃತ್ಯಕ್ಕೆ ಜನ ಬೆಚ್ಚಿಬಿದ್ದಿದ್ದಾರೆ.

Sponsored Ads

Continue Reading

ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಬೀದಿ ನಾಯಿಗೆ ಯಾರೋ ಪುಂಡರು ಪಟ್ಟೆ ಹುಲಿಯ ಬಣ್ಣ ಬಳಿದು ಬಿಟ್ಟಿದ್ದಾರೆ. ಇದನ್ನು ನೋಡಿದ ದಾರಿಹೊಕರು ಒಂದು ಕ್ಷಣಕ್ಕೆ ಬೆಚ್ಚಿ ಬಿದ್ದಿದ್ದು ಅನೇಕರು ನಿಜ ಪಟ್ಟೆ ಹುಲಿಯೆಂದು ಓಡಿ ಹೋಗಿದ್ದಾರೆ.

ಇದರ ವರ್ತನೆಯಲ್ಲಿ ವ್ಯತ್ಯಾಸ ಗಮನಿಸಿದ ಕೆಲವರು ಹತ್ತಿರ ಹೋಗಿ ಗಮನಿಸಿದಾಗ ಇದು ಹುಲಿಯಲ್ಲ, ಬೀದಿ ನಾಯಿ ಎಂಬುದು ಅರಿವಾಗಿದೆ. ಹೀಗೆ ಪುಂಡರ ಕೃತ್ಯಕ್ಕೆ ಊರಿನ ಜನ ತೊಂದರೆ ಅನುಭವಿಸಿದ್ದಾರೆ. ಊರಿನ ಜನರನ್ನ ಬೆಚ್ಚಿಬೀಳಿಸಿದ ಆ ಪಟ್ಟೆಹುಲಿಯ ವೀಡಿಯೋ ಇಲ್ಲಿದೆ ನೋಡಿ,

Watch Video

أحدث أقدم