ಮಹೇಂದ್ರ ಕುಮಾರ್ ಅವರು ತಮ್ಮ ಬೆಂಬಲಿಗರಿಗೆ ಕೊನೆಯದಾಗಿ ಕಳುಹಿಸಿದ್ದ ಆ ವಾಯ್ಸ್ ರೆಕಾರ್ಡ್ ನಲ್ಲಿ ಏನಿದೆ ಗೊತ್ತೇ? ಇಲ್ಲಿದೆ ಆ ವಾಯ್ಸ್ ರೆಕಾರ್ಡ್ ಕೇಳಿ

ಬಜರಂಗದಳದ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ಇಂದು ಮುಂಜಾನೆ ಹೃದಯಾಘಾತದಿಂದ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಬಜರಂಗದಳದ ರಾಜ್ಯ ಸಂಚಾಲಕರಾಗಿದ್ದ ಅವರು ಅದರಿಂದ ಹೊರಬಂದ ಬಳಿಕ ಸಂಘ ಪರಿವಾರದ ಕಟು ಟೀಕಾಕಾರರಾಗಿ ಗುರುತಿಸಿಕೊಂಡಿದ್ದರು.

ಸಂಘಪರಿವಾರದಲ್ಲಿದ್ದ ಸಂದರ್ಭದಲ್ಲಿ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಮಹೇಂದ್ರಕುಮಾರ್ ನಂತರದಲ್ಲಿ ಬಜರಂಗದಳ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರಿದ್ದರು. ಇದೀಗ ಅವರು ಕೊನೆಯದಾಗಿ ತಮ್ಮ ಬೆಂಬಲಿಗರಿಗೆ ಕಳುಹಿಸಿದ್ದ ವಾಯ್ಸ್ ರೆಕಾರ್ಡ್ ವೈರಲ್ ಆಗಿದೆ. ಇದರಲ್ಲಿ ಅವರು ಕರಾವಳಿಯ ಬಿಜೆಪಿ ಭರತ್ ಶೆಟ್ಟಿ ಅವರ ಬಗ್ಗೆ ಮಾತನಾಡಿದ್ದು, ಭರತ್ ಶೆಟ್ಟಿಯವರು ಕರೋನಾ ಸೋಂಕಿತೆಯ ಅಂತ್ಯಸಂಸ್ಕಾರದಲ್ಲಿ ನಡೆದುಕೊಂಡ ರೀತಿಯನ್ನು ಠೀಕಿಸಿ ಪೋಸ್ಟ್ ಗಳನ್ನು ಹಾಕುವಂತೆ ತಮ್ಮ ಸಂಗಡಿಗರಲ್ಲಿ ಕೇಳಿಕೊಂಡಿದ್ದರು. ಇಲ್ಲಿದೆ ಕೇಳಿ ವಾಯ್ಸ್ ರೆಕಾರ್ಡ್,
Previous Post Next Post