'ಭಾರತ ವಿರೋಧಿ ಟ್ವೀಟ್' ಬಗ್ಗೆ ಒಮಾನಿನ ರಾಜಕುಮಾರಿ ಹೇಳಿದ್ದೇನು ನೋಡಿ

ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಧೋರಣೆಯಲ್ಲಿ ಪಾಕಿಸ್ತಾನದ ಕೈವಾಡ ಇರೋದು ಇದೀಗ ಬಯಲಾಗಿದೆ. ಈ ಎಲ್ಲಾದರ ಹಿಂದೆ ಇರೋದು ಪಾಕಿಸ್ತಾನದ ಐಎಸ್ಐ ಹಾಗೂ ಕೆಲ ದೇಶವಿರೋಧಿ ಭಾರತೀಯ ಮುಸ್ಲಿಮರು ಎಂಬುದು ಸ್ಪಷ್ಟವಾಗಿದ್ದು ಗಲ್ಫ್ ರಾಷ್ಟ್ರಗಳ ಪ್ರಮುಖ ನಾಯಕರ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆಗಳನ್ನು ತೆರೆದು ಭಾರತ ವಿರೋಧಿ ಸರಣಿ ಟ್ವೀಟ್ ಗಳನ್ನು ಮಾಡಲಾಗುತ್ತಿದೆ.

ಇದಕ್ಕೆ ಕೆಲ ಭಾರತೀಯ ಮೂಲದ ಮುಸ್ಲಿಮರು ಕೈ ಜೋಡಿಸಿರೋದನ್ನು ಭಾರತೀಯ ಮೂಲದ ಹ್ಯಾಕರ್ 'ಅನ್ಸುಲ್ ಸಕ್ಸೇನ' ಅವರು ಬಯಲು ಮಾಡಿದ್ದು, ಪಾಕಿಸ್ತಾನದ ಐಎಸ್ಐ ನೀಡುವ ಎಂಜಲು ದುಡ್ಡಿಗೆ ತಾನು ಹುಟ್ಟಿಬೆಳೆದ ದೇಶದ ವಿರುದ್ಧವೇ ಅವಹೇಳನಕಾರಿ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಒಮಾನಿನ ರಾಜಕುಮಾರಿಯ ಹೆಸರಿನಲ್ಲಿ ಭಾರತೀಯರ ವಿರುದ್ಧ ಟ್ವೀಟ್ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಭಾರತೀಯ ಮುಸ್ಲಿಮರೂ ಅನೇಕ ಕಡೆಗಳಲ್ಲಿ ಹಂಚಿಕೊಂಡು ಪ್ರಧಾನಿ ಮೋದಿ ವಿರುದ್ಧ ಪ್ರಚಾರವನ್ನೂ ಮಾಡಿದ್ದರೂ.

ಟ್ವೀಟ್ ನಲ್ಲಿ ‘ಭಾರತದಲ್ಲಿ ಮುಸ್ಲಿಮರ ಕಿರುಕುಳ ನಿಲ್ಲದಿದ್ದರೆ, ಇಲ್ಲಿ ಕೆಲಸ ಮಾಡುವ ಹತ್ತು ಲಕ್ಷ ಹಿಂದೂಗಳನ್ನು ವಾಪಸ್ ಭಾರತಕ್ಕೆ ಕಳುಹಿಸಲಾಗುವುದು’ ಎಂದು ಒಮಾನಿನ ರಾಜಕುಮಾರಿಯ ಹೆಸರಿನಲ್ಲಿ ಟ್ವಿಟರ್ ಅಕೌಂಟ್ ನಲ್ಲಿ ಬೆದರಿಕೆ ಹಾಕಲಾಗಿತ್ತು. ಇದೀಗ ಈ ಬಗ್ಗೆ ಒಮಾನಿನ ರಾಜಕುಮಾರಿ ಸ್ಪಷ್ಟನೆ ನೀಡಿದ್ದಾರೆ.
ಒಮಾನ್ ರಾಜಕುಮಾರಿ ಮೋನಾ ಬಿಂತ್ ಫಹದ್ ಅಲ್ ಸೈದ್ ನೀಡಿರುವ ಸ್ಪಷ್ಟನೆ ಪ್ರಕಾರ “ನನ್ನ ನಕಲಿ ಖಾತೆಯ ಮೂಲಕ ವಿವಾದಿತ ಪೋಸ್ಟ್ ಅನ್ನು ಪ್ರಕಟಿಸಲಾಗಿದೆ, ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇಂತಹ ವಿಷಯಗಳು ಒಮಾನಿ ಸಮಾಜಕ್ಕೆ ಸ್ವೀಕಾರಾರ್ಹವಲ್ಲ. ನಾನು socialhhmonaalsaid (Instagram) ಮತ್ತು @MonaFahad13 (Twitter ) ಮೂಲಕ ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ಅಸ್ತಿತ್ವದಲ್ಲಿದ್ದೇನೆ" ಎಂದು ಹೇಳಿದ್ದಾರೆ.

ನಕಲಿ ಟ್ವೀಟ್ ಖಾತೆ ಸೃಷ್ಟಿಸಿರುವುದರ ಹಿಂದೆ ಪಾಕ್ ಸೇನೆ ಹಾಗೂ ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ಕೈವಾಡವಿದೆ ಎನ್ನಲಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಭಾರತೀಯರನ್ನು ಕೆಣಕುವ ಉದ್ದೇಶದಿಂದಲೇ ಈ ನಕಲಿ ಖಾತೆ ತೆರೆಯಲಾಗಿದೆ ಎನ್ನಲಾಗುತ್ತಿದೆ.
ಆದರೆ ಕೆಲ ಭಾರತೀಯ ಮುಸ್ಲಿಮರು ಪಾಕಿಗಳ ಎಂಜಲು ದುಡ್ಡಿಗೆ ಕೈಯೊಡ್ಡಿ ನಕಲಿ ಖಾತೆಗಳನ್ನು ಸೃಷ್ಟಿಸಿಕೊಂಡು ದೇಶದ ವಿರುದ್ಧವೇ ಪೋಸ್ಟ್ ಹಾಕುತ್ತಿದ್ದು, ಇಂತಹ ದೇಶದ್ರೋಹಿಗಳ ಪಾಸ್ ಪೋರ್ಟ್ ಕ್ಯಾನ್ಸಲ್ ಮಾಡಿಸಿ ಎಂಬ ಕೂಗು ಕೇಳಿಬರುತ್ತಿದೆ. ಅರಬ್ಬರ ಮುಖವಾಡ ತೊಟ್ಟು ನಕಲಿ ಅಕೌಂಟ್ ಗಳ ಮೂಲಕ ಭಾರತದ ವಿರುದ್ಧ ಪೋಸ್ಟ್ ಮಾಡುತ್ತಿರುವ ಹಲವು ಭಾರತೀಯ ಮುಸ್ಲಿಮರನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆ.

ಬಾಟಲಿಗೆ ಮೂತ್ರ ತುಂಬಿಸಿ ಹಣ್ಣಿಗೆ ಸಿಂಪಡಿಸಿ ಮಾರುತ್ತಿದ್ದ ಅಜ್ಜ ಪೋಲೀಸ್ ವಶಕ್ಕೆ, ವೀಡಿಯೋ ನೋಡಿ
Previous Post Next Post